Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಬರಹಗಾರನೊಬ್ಬನ ಕಟೌಟ್ ಥಿಯೇಟರ್ ಮುಂದೆ ನಿಂತಿರೋದು ಬಹುಶಃ ಇದೇ ಮೊದಲು.


ಬರಹಗಾರನೊಬ್ಬನ ಕಟೌಟ್ ಥಿಯೇಟರ್ ಮುಂದೆ ನಿಂತಿರೋದು ಬಹುಶಃ ಇದೇ ಮೊದಲು. 
ಡೈರೆಕ್ಟರ್ ಸ್ಪೆಷಲ್‌ ಸಿನಿಮಾಗೆ ಗುರುಪ್ರಸಾದ್ ಕಟೌಟ್ ಹಾಕಿಸ್ಕೊಂಡಿದ್ರು. ಅವ್ರು ಸಿನಿಮಾ‌ಮಂದಿ ಅಂತಾನೇ ಲೆಕ್ಕಕ್ಕೆ ಬರೋವ್ರು. ಡೈರೆಕ್ಟರ್ ಕೂಡ ಆಗಿದ್ದರಿಂದ ಡೈರೆಕ್ಟರ್ ಕಟೌಟ್ ಅದು. ಇನ್ನು ರೈಟರ್ ಡೈರೆಕ್ಟರ್ ಹೀರೋ ಎಲ್ಲವೂ ಆದ ಸಂದರ್ಭದಲ್ಲಿ ರವಿಚಂದ್ರನ್ ಉಪೇಂದ್ರ ಇನ್ನಿತರರ ಕಟೌಟ್ ಗಳು ವಿಶೇಷ ಅನಿಸೋದಿಲ್ಲ.
ಆದರೆ ತೇಜಸ್ವಿ ಸಿನಿಮಾಲೋಕದವರಲ್ಲ. ಬರಹಲೋಕದ ಸ್ಟಾರ್‌ ಅವ್ರು.
ಅವರ ಕಥೆಯೊಂದು ಇದೀಗ ಸಿನಿಮಾ ಆಗಿದೆ. ಈ ಹಿಂದೆಯೂ ಆಗಿದೆ. ಆದರೆ‌ ಆಗ ಸಿಕ್ಕಿರದ ಇಂಥದ್ದೊಂದು ಕಟೌಟ್ ಗೌರವ ಈಗ ಸಿಕ್ಕಿದೆ. ಖುಷಿ.

ತೇಜಸ್ವಿ ಕಥೆಗಳು ಓದ್ತಾ ಇದ್ದಾಗ ವಿಶುಯಲ್ ಗಳು ಕಣ್ಮುಂದೆ ಬಂದು ನಮ್ಮನ್ನು ಕಲ್ಪನಾಲೋಕದಲ್ಲಿ  ರಂಜಿಸುತ್ತವೆ. ಅವು ನಿಜಕ್ಕೂ ದೃಶ್ಯರೂಪದಲ್ಲಿ ಬಂದಾಗ ಆ ಕಲ್ಪನೆಯ ದೃಶ್ಯಾವಳಿಗಳನ್ನ ಸರಿಗಟ್ಟಬಲ್ಲವಾ? ನಿರ್ದೇಶಕರ ತಾಕತ್ತಿನ ಮೇಲೆ ಅವಲಂಬಿಸಿದೆ‌ ಅದು. ಒಂದೊಮ್ಮೆ ನಿರ್ದೇಶಕರಿಗೆ ಅದು ಸಾಧ್ಯ ಆಗಿಲ್ಲ ಅಂದರೆ ಅದು ನಿರ್ದೇಶಕರ ಸೋಲಲ್ಲ. ತೇಜಸ್ವಿಯ ಗೆಲುವು.
ನೋಡ್ಬೇಕು ಡೇರ್ ಡೆವಿಲ್ ಮುಸ್ತಫನನ್ನು.

Comments