Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ನನ್ನ ಸ್ನೇಹಿತನ ಜಮೀನಿಗೆ ಹೋಗಿದ್ದೆ ಅವನ ಜೊತೆ ಮಾತಾಡಿ ವಾಪಸ್ ಬರುವಾಗ ಅಲ್ಲೊಂದುಯಾರದೋ ದೊಡ್ಡ ಮಾವಿನ ತೋಟ ಕಣ್ಣಿಗೆ ಬಿತ್ತು.


ನನ್ನ ಸ್ನೇಹಿತನ ಜಮೀನಿಗೆ ಹೋಗಿದ್ದೆ ಅವನ ಜೊತೆ ಮಾತಾಡಿ ವಾಪಸ್ ಬರುವಾಗ ಅಲ್ಲೊಂದು
ಯಾರದೋ ದೊಡ್ಡ ಮಾವಿನ ತೋಟ ಕಣ್ಣಿಗೆ ಬಿತ್ತು.

ಈ ಮಾವಿನಕಾಯಿ ಕದ್ದು ತಿನ್ನೋದೆ ಬಹುರುಚಿ
ಅಕ್ಕ ಪಕ್ಕದಲ್ಲೂ ಯಾರು ಇಲ್ಲದ ನಿರ್ಜನ ಪ್ರದೇಶ 
ಅಲ್ಲೇ ಪಕ್ಕದಲ್ಲಿ ಒಂದು ದೊಡ್ಡ ಚೀಲನೆ ಸಿಗ್ತು.

ಮರದ ಬಳಿಹೋಗಿ ನೋಡಿದೆ ಒಂದಕ್ಕಿಂತ ಒಂದು ಬಹಳ ಸುಂದರವಾಗಿದ್ದ ಕಾರಣ ಚೀಲ ತುಂಬಿದ್ದೆ ಗೊತ್ತಾಗಲಿಲ್ಲ.
ತೋಟದಿಂದ ಆಚೆ ಬರುವಷ್ಟರಲ್ಲಿ ಅಲ್ಲೊಬ್ಬ 
ಹಿರಿಯ ವ್ಯಕ್ತಿ ಪ್ರತ್ಯಕ್ಷವಾದ.!! 

ಒಂದೋ ಎರಡೋ ಕಿತ್ತಿದ್ರೆ ಹೇಗೋ ನಿಭಾಯಿಸಬಹುದಿತ್ತು ಆದ್ರೆ ಇಲ್ಲಿ ಇಷ್ಟೊಂದು ಇದೆ ಏನ್ ಮಾಡೋದು
ಅಂತ ಭಯ ಆಯ್ತು.

ಅವನೇ ಜಮೀನಿನ ಮಾಲೀಕ ಇರ್ಬೇಕು ಅಥವಾ ಮರವನ್ನು ನೋಡಿಕೊಳ್ಳುವ ಕಾವಲುಗಾರ
ಅನ್ಕೊಂಡೆ ನಾನು.ಅವ ನಮ್ಮ ಹತ್ತಿರವಾಗುತ್ತಿದ್ದಂತೆ 
ಏನೋ ಕಳವಳ ಮನಸ್ಸಿನಲ್ಲಿ..

ಆದ್ರೆ ಅವರೆ ಬಂದು 
ಸ್ವಾಮಿ ಒಂದ್ ಮಾವಿನ ಕಾಯಿ ಕಿತ್ತುಕೊಳ್ಳುವೆ ಅಂತ ಕೇಳ್ದ .
ಅವಾಗ ನಾನೇ ಮಾಲೀಕನಂತೆ ಅಲ್ಲೇ ಲಾಸ್ಟ್ ಮರದಲ್ಲೆ ಕಿತ್ಕೊಂಡ್ ಹೋಗಿ..ಮತ್ ಬರ್ಬೇಡಿ ಅಂದೇ.. ಆಯ್ತು ಅಂತ ಹೇಳಿ ಕಿತ್ಕೊಂಡ್ ಹೋದ..😊 
ಸದ್ಯ ನಾನ್ ಬಚಾವ್ ಆಗಿದ್ದೇ ಖುಷಿ.
ಕಳ್ಳನನ್ನೇ ಮಾಲೀಕನ್ನನಾಗಿ ಮಾಡಿದ ಅವರಿಗೆ 
ಎಷ್ಟು ಹೇಳಿದ್ರು ಕಮ್ಮಿನೇ...

Comments